Tuesday 4 December 2012
Thursday 27 September 2012
Sunday 16 September 2012
Monday 20 August 2012
......66 ಸ್ವಾತಂತ್ರ್ಯ.........
ಮುತ್ತು,ವಜ್ರ,ರತ್ನ ಹವಳದ
ಸಿಂಗಾರ ನಿನ್ನ ಕೊರಳಿಗಿತ್ತು
ಕಿತ್ತರಾ ಕಿರಾತಕರು ನಿನ್ನ
ಕೊರಳ ಲಂಕಾರಕಿಟ್ಟ ವೆಲ್ಲವ
ಗುಲಾಮಗಿರಿಯ ಕಿರುಬೆರಳಲಿ ಹಿಡಿದು
ನಿಂತು ಆಳಿದರಾ ರಕ್ಕಸರು
ಆಳ್ವಿಕೆಯ ಸಿಂಹಾಸನವ ಯುಗಗಳೇ
ಹೋರಾಡಿ ಬಿಡಿಸಿದರು ನಿನ್ನ
ಕೆಚ್ಚೆದೆಯ ಮಕ್ಕಳು
ಇದ್ದ ಹರಕಲು ಸೀರೆಯನ್ನೇ ಉಡಿಸಿ
ನಿನಗೆ ಕೈಗೆ ಹಾಕಿದ್ದ ಬೇಡಿಯಾ
ದೂರ ಮಾಡಿದರಾ ಮಹಾತ್ಮರು
ಮುಂದಿನ ಪೀಳಿಗೆಗೆ....
ಇಂದೋ ನಿನಗೆ
ಕಿಂಚಿತ್ತೂ ನಿನ್ನತನವಿಲ್ಲ
ಸಂಸ್ಕೃತಿಯೇ ನಿನ್ನದಲ್ಲ
ವಿಕ್ರುತಿಯೇ ಎಲ್ಲಾ
ಭ್ರಷ್ಟಾಚಾರದ ಕುಂಕುಮವಿಟ್ಟು
ಸಾಲದ ಸೀರೆಯುಡಿಸಿರುವರು ನಿನಗೆ..
ಸ್ವಂತಿಕೆಯ ಸ್ವಾತಂತ್ರ್ಯ
ನಿನ್ನ ಕುತ್ತಿಗೆಗೆ ಹಾರ ಯಾವಾಗ???
ಕೊನೇಪಕ್ಷ
ಬರಲಿ 66 ತಿರುಗಿದಾಗ....
Saturday 18 August 2012
Wednesday 8 August 2012
.....ನಿವೇದನೆ.........
ಪ್ರೀತಿಯ ನೀ ಹೇಗೆ ಅಳೆದೆ
ಮಾಪನವನ್ನಾಗಿಸಿ ಕಾಲವನ್ನು ಮಾತ್ರ???
ಬಚ್ಚಿಟ್ಟೂ ,ಬಚ್ಚಿಡಲಾರದ
ಭಾವನೆಗಳ ಹಂಚಿಕೊಂಡದನ್ನ,
ಸಮಯಕ್ಕೇ ಸವಾಲೆಸೆದು
ನಸುನಕ್ಕು ಮುನ್ನಡೆದ ದಿನಗಳನ್ನ
ಮರೆತೆಯಾ ನೀ???
ಎಂದೋ ಇದ್ದ ಇತಿಹಾಸ
ಮತ್ತೆ ಕದ ತಟ್ಟಿದಾಗ,
ಬದಿದೆಬ್ಬಿಸಿತೆ ಎಂದೋ
ಒಮ್ಮೆ ಅರಳಿದ್ದ
ನನ್ನೊಂದಿಗಿರುವಾಗ ನಿದಿರೆಗೆ
ಜಾರಿದ್ದ ಪ್ರೇಮ......????
ಮುನಿಸಿಕೊಳ್ಳಲು ಇತಿಹಾಸ
ವರ್ತಮಾನವನ್ನೇ ಅಲ್ಲಗಳೆದೆಯಾ ನೀ??
ಎರಡು ಅನುರಾಗ ದಡಗಳ
ನಡುವಿರುವ ದ್ವಂದ್ವ ಸೇತುವೆಯಲ್ಲಿ
ನಿಂತಿರುವೆ ನೀ...
ವರ್ತಮಾನವಾಗುವುದು ಒಂದು ನೆನಪು
ಇತಿಹಾಸದ ದಡವನ್ನಾರಿಸಿದರೆ ನೀ....
Thursday 2 August 2012
Thursday 19 July 2012
Sunday 8 July 2012
...ಏಕಾಂತ...
ಅಂದಿದ್ದ ಜೋಡುಮರ
ಇಂದೇಕೋ ಒಂಟಿಯಾಗಿ
ಬಿರುಗಾಳಿಗೆ ಸಿಲುಕಿ
ನೆಲಕ್ಕುರಿಳಿದ ಸಂಗಾತಿಯ
ದಿಟ್ಟಿಸುತ್ತಾ ತಲೆಬಾಗಿ ನಿಂತಿದೆ..
ಮಿಲನದ ಶತ್ರು ಬಿರುಗಾಳಿ
ಕರುಣೆಯೇ ಇಲ್ಲದಂತೆ
ಉರುಳಿ ಬಿದ್ದ ಮರದ
ಕುರುಹೂ ಬಿಡಬಾರದೆಂದು ಬೀಸಲು,
ಪಾಪ! ನೋಡಲಾರದೆ ಆ ಒಂಟಿ ಮರ
ತನಗಾಗಿ ಕಣ್ನೀರಿಡಲು
ಕಾರ್ಮೋಡಗಳ ಮೊರೆ ಇಟ್ಟಿದೆ...
ಅಳಲು ಜೋರಾಗಿ ಎಲ್ಲಾ ಮೋಡಗಳು
ದಾರುಳ ಆಕ್ರಂಧನ ಕಿವಿಗೆ ರಾಚಿದೆ...
ಸಮಸ್ತ ಮಳೆಹನಿಗಳು ಧರೆಗುರುಳಿ
ಕೊನೆಗೂ ಬಿರುಗಾಳಿ
ಮೌನ ತಾಳಲು
ಏಕಾಂಗಿಯಾದ ಮರಕ್ಕೆ
ನಿಶಬ್ಧದೊಂದಿಗೆ ಏಕಾಂತ
ಮಾತ್ರ ಜೊತೆಯಾಗಿದೆ....
Monday 2 July 2012
Saturday 26 May 2012
ಹೇಗೆ ತಾನೇ ಸಾಧ್ಯ???
ಚಂದಿರ ನಿನ್ನ ಹೊಗಳಿದ್ದ ಕಾರಣ
ಮುನಿಸು ಬೆಳದಿಂಗಳಿಗೆ..
ರವಿಯೂ ನೋಡಿದಕ್ಕೆ ನಿನ್ನ
ಕೋಪ ಸೂರ್ಯಕಾಂತಿಗೆ ...
ಕಾರ್ಮೋಡ ನಿನಗೆ ತಂಪು ತರಲು
ಮಿಂಚು ಗುಡುಗಿದ್ದಾಳೆ ತಾ ಬಾರದೆ..
ಸಾಗರವು ನಿನ್ನನ್ನಪ್ಪಲು ಅಲೆಯಾದಾಗ
ನದಿಗಳೆಲ್ಲಾ ಅತ್ತು ,
ಉಪ್ಪು ತುಂಬಿದರು ಅವನ ಎದೆಯೊಳಗೆ...
ವರ್ಣಿಸಲು ನಿನ್ನ ಸಾಧ್ಯವಾಗದೆ
ವ್ಯಾಕರಣವೂ ಪರದಾಡಿದೆ
ಉಪಮೇಯ ಸಿಗದೆ...
ನಿನ್ನ ನೆರಳು ಭುವಿಯ ಸೋಕುವಾಗ
ತಗುಲದಿರಲಿ ಕಲ್ಲೆಂದು
ಹುಲ್ಲುಗಾವಲೇ ನಿನ್ನ ಹಾದಿಯಾಗಿದೆ....
ಕಂಡ ಕ್ಷಣವೇ ನಿನ್ನ,
ನಾ ಕವಿಯಾಗಲು....
ಹೇಗೆ ತಾನೇ ಸಾಧ್ಯ???
ಹೇಳು ನಿನ್ನ ,
ನಾ ಪ್ರೀತಿಸದೇ ಇರಲು....
Friday 4 May 2012
Tuesday 1 May 2012
Friday 13 April 2012
Thursday 5 April 2012
Sunday 1 April 2012
Friday 30 March 2012
....ಅಳುತ್ತಿರುವಳು ವಸುಂಧರೆ.....
ಕೋಟಿ ಕನಸುಗಳ ಹೊತ್ತು
ನವಮಾಸ ಕಾದಳು
ವೇದನೆಯ ಕಂಬನಿಯೂ
ಸಂತಸದ ಚಿಲುಮೆಯಾಗಿ
ಹರಿಸಿ ಹೆತ್ತಳು
ತನ್ನನ್ನೇ ತೇಯುತ್ತಾ
ಪೊರೆದಳಾತಾಯಿ ತನ್ನೆಲ್ಲ ಮಕ್ಕಳ...
ತ್ಯಾಗವನ್ನೇ ಮರೆತ
ಕುಡಿಗಳು ಸುಟ್ಟರು ಅವಳ
ಹಸಿರು ಸೀರೆ,
ಬಾಯಾರಿದಾಗ ಉಣಿಸುತ್ತಿದ್ದ
ಗಡಿಗೆಗಳ ಕಲುಷಿತ
ಮಾಡಿದರಾ ರಕ್ಕಸರು
ಅವಳು ಕಟ್ಟಿದ
ಸೂರಿನ ಮೇಲ್ಚಾವಣಿಯನ್ನೂ
ಬಿಡದ ಮಂದಿ
ಸ್ವಂತ ಇಚ್ಚೆಗಾಗಿ
ಅದನ್ನೂ ಹರಿದರು...
ಮಾಡಿದ ಅನಾಚಾರದಿಂದ
ನೋವಾದಾಗ ಅವರಿಗೆ
ಕಣ್ಣೀರಿತ್ತಲಿವಳು
ಅವಳ ಆಕ್ರಂಧನವನ್ನೂ
ಲೆಕ್ಕಿಸದ ಸಂತಾನ
ಅವಳನ್ನೇ ಕಿವುಡಳನ್ನಾಗಿಸಿದರು
ಮೂಗಿಯನ್ನಾಗಿಸಿ ಅವಳ
ಬಾಯನ್ನೇ ಹೊಲಿದರು,
ಆದರೂ ಅವರ ಕ್ಷಮಿಸಿ
ಅಂತ್ಯ ಆಮಂತ್ರಿಸುತ್ತಿರುವ
ತನ್ನ ಕುಡಿಗಳ ಮನದಲ್ಲೇ
ನೆನೆನೆನೆದು ಈಗಲೂ
ಅಳುತ್ತಿರುವಳು ಆ ವಸುಂಧರೆ...
Monday 26 March 2012
....ಅಳುತ್ತಿರುವಳು ವಸುಂಧರೆ.....
ಕೋಟಿ ಕನಸುಗಳ ಹೊತ್ತು
ನವಮಾಸ ಕಾದಳು
ವೇದನೆಯ ಕಂಬನಿಯೂ
ಸಂತಸದ ಚಿಲುಮೆಯಾಗಿ
ಹರಿಸಿ ಹೆತ್ತಳು
ತನ್ನನ್ನೇ ತೇಯುತ್ತಾ
ಪೊರೆದಳಾತಾಯಿ ತನ್ನೆಲ್ಲ ಮಕ್ಕಳ...
ತ್ಯಾಗವನ್ನೇ ಮರೆತ
ಕುಡಿಗಳು ಸುಟ್ಟರು ಅವಳ
ಹಸಿರು ಸೀರೆ,
ಬಾಯಾರಿದಾಗ ಉಣಿಸುತ್ತಿದ್ದ
ಗಡಿಗೆಗಳ ಕಲುಷಿತ
ಮಾಡಿದರಾ ರಕ್ಕಸರು
ಅವಳು ಕಟ್ಟಿದ
ಸೂರಿನ ಮೇಲ್ಚಾವಣಿಯನ್ನೂ
ಬಿಡದ ಮಂದಿ
ಸ್ವಂತ ಇಚ್ಚೆಗಾಗಿ
ಅದನ್ನೂ ಹರಿದರು...
ಮಾಡಿದ ಅನಾಚಾರದಿಂದ
ನೋವಾದಾಗ ಅವರಿಗೆ
ಕಣ್ಣೀರಿತ್ತಲಿವಳು
ಅವಳ ಆಕ್ರಂಧನವನ್ನೂ
ಲೆಕ್ಕಿಸದ ಸಂತಾನ
ಅವಳನ್ನೇ ಕಿವುಡಳನ್ನಾಗಿಸಿದರು
ಮೂಗಿಯನ್ನಾಗಿಸಿ ಅವಳ
ಬಾಯನ್ನೇ ಹೊಲಿದರು,
ಆದರೂ ಅವರ ಕ್ಷಮಿಸಿ
ಅಂತ್ಯ ಆಮಂತ್ರಿಸುತ್ತಿರುವ
ತನ್ನ ಕುಡಿಗಳ ಮನದಲ್ಲೇ
ನೆನೆನೆನೆದು ಈಗಲೂ
ಅಳುತ್ತಿರುವಳು ಆ ವಸುಂಧರೆ...
Monday 19 March 2012
...ಅಭಿಮಾನಿ.....
ನಿನ್ನ ಮುಂಗುರುಳುಗಳು ಮಾಡುವ
ತಂಗಾಳಿಯೊಂದಿಗಿನ ಸಂವಾದದ
ಅಭಿಮಾನಿ ನಾ.....
ಮಂದಹಾಸ ಮನೆಮಾಡಿರುವ
ಸ್ವರ್ಣ ವರ್ಣ ವದನದ
ಅಭಿಮಾನಿ ನಾ.....
ತುಟಿಯಂಚಲಿ ಮೂಡುವ
ತುಂಟ ನಗೆಯ
ಅಭಿಮಾನಿ ನಾ....
ಕಣ್ಣಂಚಲಿ ಬಚ್ಚಿಟ್ಟುಕೊಂಡಿರುವ
ಮಿಂಚಿನ
ಅಭಿಮಾನಿ ನಾ....
ಆವರಿಸಿದಾಗಲೆಲ್ಲಾ ಚಿಂತೆ ಆ
ಹಣೆಯಲ್ಲಿ ನಿಲ್ಲುವ ಗೆರೆಗಳ
ಅಭಿಮಾನಿ ನಾ...
ಅತ್ತಾಗ ಗಲ್ಲಕ್ಕುರುಳುವ
ಮುತ್ತಿನಂತಿರುವ ಕಂಬನಿಗಳ
ಅಭಿಮಾನಿ ನಾ...
ಕನಸಿನ ಲೋಕಕ್ಕೆ ತೆರಳುವಾಗ
ನೀ ಮುಚ್ಚುವ ಕಣ್ರೆಪ್ಪೆಗಳ
ಅಭಿಮಾನಿ ನಾ...
ಸೌಂದರ್ಯ ಎಂಬ ಪದಕ್ಕೆ
ಸವಾಲಾಗಿರುವೆ ಎನ್ನುವವರಿಗೆಲ್ಲಾ
ಉತ್ಪ್ರೇಕ್ಷೆಯಲ್ಲ ನೀ, ಎಂದು ಉತ್ತರಿಸುವ
ಅಭಿಮಾನಿ ನಾ....
Tuesday 13 March 2012
Tuesday 6 March 2012
...ಔದಾರ್ಯ...
ರವಿಯು ಮೂಡಣದಿ ಬಂದಾಗ
ಭುವಿಗೋ ಇನ್ನೂ ನಿದ್ರೆಯ ಮಂಪರು
ಅವಳನ್ನು ಎಬ್ಬಿಸಿ ತಂಗಾಳಿಯ
ತಂಪಿನ ಹೊದಿಕೆಯನ್ನು ಸರಿಸಿ
ಮೃದುವಾಗೆ ನಗುತ್ತಾ
ನಡು ಹಗಲಲ್ಲಿ ಅವಳ
ಶಿರದ ಕಿರೀಟವಾಗಿ
ಮುಸ್ಸಂಜೆಯ ವಿದಾಯ
ಹೇಳುವಾಗ ನವನವೀನ ಬಣ್ಣಗಳ
ಆಗಸಕ್ಕೆ ಬಳಿದು
ಬೆಳ್ಳಕ್ಕಿಗಳ ದಂಡಿನೊಂದಿಗೆ ವಿದಾಯ
ಹೇಳಿ ಅವಳನೊಮ್ಮೆ ಪೂರ್ತಿಯಾಗಿ ಕಣ್ತುಂಬಿಕೊಂಡು
ಪಡುವಣದ ಸಾಗರದಲ್ಲಿ
ಭಾರ ಮನಸ್ಸಿನೊಂದಿಗೆ ಮುಳುಗುವನು....
ಅವನು ಮರೆಯಾಗುತ್ತಲೇ ಮುಗುಳುನಗೆಯೊಂದಿಗೆ
ಬರುವ ಚಂದಿರನಿಗೂ
ಧರೆಯೆಂದರೆ ಎಲ್ಲಿಲ್ಲದ ಪ್ರೀತಿ.
ಹುಣ್ಣಿಮೆಯ ದಿನವೊಂತು
ಇಳೆಯ ಎದೆಯಾಳದಲ್ಲೂ
ಅಲೆಗಳ ಏರಿಳಿತ.
ಅವಳಿಗರಿವಿಲ್ಲ ಅವನದು
ಬರೀ ಬೆಳಕಿನ ಪರದೆಯೆಂದು
ಸಾಲಕ್ಕೆ ಕೇಳಿ ಪಡೆದ ವಸ್ತ್ರ,
ಬೆಳದಿಂಗಳಿಗೆ ಮರುಳಾಗಿ
ರವಿಯನ್ನು ಮರೆತು
ತಾರೆಗಳೊಂದಿಗೆ ಇವಳೂ
ಹೊಗಳುವಳು ಅವನನ್ನೇ.
ಇವನ ಬಣ್ಣ ಬಯಲಾಗುವ
ಹೊತ್ತಿಗೆ ಮಲಗುವ ಅವಳಿಗೆ
ಎಲ್ಲರನ್ನೂ ಮೋಡಿ ಮಾಡುವ
ಚಂದಿರನ ಅರ್ಧಸತ್ಯ
ತಿಳಿದಿಲ್ಲ ಪಾಪ!!
ಅವನಿಗಿರುವ ಹೊಳಪೂ ,
ತನಗಿದೆ ಎಂದು ಬೀಗುವ ಸೌಂದರ್ಯವೂ,
ಅವನ ಆ ಮೋಹಕ ನಗುವೂ,
ಎಲ್ಲಾ ತಿಳಿದೂ ಏನನ್ನೂ ಅಪೇಕ್ಷಿಸದೆ
ಅವಳ ನಗುವಿಗಾಗಿ
ಬದುಕುತ್ತಿರುವ ರವಿಯ ಔದಾರ್ಯವೆಂದು....
Wednesday 29 February 2012
........ವ್ಯಾಕರಣ....
ವ್ಯಾಕರಣದಂತೆ ಬದುಕು
ಪ್ರಶ್ನಾರ್ಥಕ(??) ಚಿಹ್ನೆಗಳೇ
ಪ್ರತೀ ಸಾಲಿಗೂ
ಉತ್ತರ ದೊರೆತರೆ
ಆಶ್ಚರ್ಯ ಸೂಚಕವೆ(!) ಹೊರತು
ಪೂರ್ಣವಿರಾಮವಲ್ಲ(.)
ಪಾಪ! ಅಲ್ಪವಿರಾಮವು(,)
ಅಲ್ಲಲ್ಲೇ ಗಿರಗಿಟ್ಟಲೆ ಹೊಡೆದು
ಮತ್ತದೇ ಪ್ರಶ್ನಾರ್ಥಕದ
ಬೆನ್ನೇರಿದೆ..
ಬಾಳಿನ ಅಲಂಕಾರವೂ
ಉಪಮೇಯವೇ ಸಿಗದೆ ಚಿಂತೆಯ ಮೊರೆಯಿಟ್ಟಿದೆ
ಛಂದಸ್ಸಿನ ಪದ್ಯದಂತೆ ಜೀವನ
ಲಘು( U), ಗುರುಗಳ(-) ಸರಿಹೊಂದಿಸುತ್ತಾ
ಒಂದರ್ಥ ಕೊಡಲು
ಒದ್ದಾಡುತ್ತಾ ನಾಲ್ಕು ಸಾಲಿನ
ಚುಟುಕೂ ಆಗದೆ
ಹಾಳೆಯಲ್ಲಿ ಬೇರೆ ಪದಗಳ
ನಡುವೆ ಜಾಗ ಹುಡುಕುತ್ತಾ
ಅಲ್ಲಲ್ಲಿ ಕಾಣುವ ಖಾಲಿ ಜಾಗವಾಗುವುದೇನೂ ಕೊನೆಗೆ...
Tuesday 28 February 2012
Sunday 26 February 2012
ಓ ಬೆಳದಿಂಗಳೇ.........
ಓ ಬೆಳದಿಂಗಳೇ
ನೀ ಬರದೆ ಅಮಾವಾಸ್ಯೆಯ
ನೆರಳು ಇರುಳನ್ನೂ ಹೆದರಿಸಿದೆ
ತಾರೆಯರೆಲ್ಲರೂ ಮಿಂಚದೆ
ಮೋಡದ ಮರೆ ಸೇರಿ
ನಿನ್ನ ನೆನಪಲ್ಲೇ ಮಿಂದಿವೆ
ಬೀಸುವ ತಂಗಾಳಿಯೂ
ಮೌನ ತಾಳಿ ನಿಶಬ್ಧವ
ಎಲೆಲ್ಲೂ ಹರಡಿದೆ
ನಾ ನೋಡಲು
ನೀಲಿ ಆಕಾಶವೂ
ಕಪ್ಪು ವರ್ಣದ ಖೈದಿಯಾಗಿ
ನೀ ಬಂದು ಬಿಡಿಸಲು ಕಾತುರತೆಯಿಂದ
ಕಾಯುತ್ತಿದೆ
ಇಷ್ಟೆಲ್ಲಾ ಆದರೂ ನೀನೆಲ್ಲಿ
ಮರೆಯಾಗಿ ನಿಂತಿರುವೆ?
ನೀನೂ ಬಾರದಂತೆ
ಆಜ್ಞೆ ಮಾಡಿತೇ ಆ ಅಮಾವಾಸ್ಯೆ?
ಅಥವಾ
ನಿನಗೂ ನಾ ಬದುಕುತ್ತಿರುವ
ಕಗ್ಗತ್ತಲ ಭಯವೇ???
Saturday 18 February 2012
......ಜಾದುಗಾರ...
ಇತಿಹಾಸವಾಗುವುದು ಏನನ್ನೋ ಅರಸುವ
ನಿನ್ನ ಕಣ್ಣಾಲಿಗಳು ನಿಂತ ತಾಣ,
ವ್ಯಥೆ ತೋಡುವುದು ನೆಲಕ್ಕುರುಳಿದ
ಮುದಿ ಎಲೆಯೂ ನೀ ನೋಡಿದಾಕ್ಷಣ,
ಅಸಂಖ್ಯಾತ ಚಹರೆಗಳು
ನಿನ್ನ ಕಣ್ಣ ಸೆರೆಯಲ್ಲಿ ,
ಪ್ರಕೃತಿಯೂ ಮಾತಾಡುವುದು
ಆ ಮಾಯಾನಗರಿಯಲ್ಲಿ,
ಚಂದ್ರ , ತಾರೆಯರೂ ಮಂದಹಾಸ
ಬೀರುವುವು ನೀ ಕಣ್ಣೆತ್ತಿ ನೋಡಲು,
ಪ್ರಪಂಚವೇ ನಲಿವುದು
ನಿನ್ನ ಕಣ್ಣ ರೆಪ್ಪೆಗಳು ಒಂದುಗೂಡಲು,
ಕನಸಿಗೂ ನಿನ್ನ ಸ್ವಾಗತಿಸಲು
ಅದೆಂಥಾ!! ತವಕ,
ಯಾವ ಸೊಗಸಾದ ಲೋಕ
ಕಟ್ಟಿರುವೆಯೂ ನೀನಲ್ಲಿ
ಎಂಬುವುದು ಪ್ರಶ್ನಾರ್ಥಕ??
ಒಂದು ಹನಿ ಇಬ್ಬನಿಯಲ್ಲಿ
ಇಡೀ ವಿಶ್ವವನ್ನೇ ಕಾಣುವೆ,
ಕಾರಣ ಹೇಳದೆ ಉರುಳುವ
ಕಂಬನಿಯನ್ನು ಕೆಲಗುರುಳದಂತೆ
ಸ್ಥಗಿತಗೊಳಿಸುವೆ,
ಮೂಕವಿಸ್ಮಯ ಜಗವ ನೋಡೋ
ಈ ನಿನ್ನ ಪರಿ,
ಕವಿ ಮನಸನ್ನೂ ಸೋಜಿಗಗೊಳಿಸಿದ
ನೀ ಜಾದುಗಾರನೇ ಸರಿ.......
(ಎಲ್ಲಾ ಛಾಯಾಗ್ರಾಹಕರಿಗೆ ಈ ಕವನ)
.....ಶೀತಲ್
Thursday 9 February 2012
Subscribe to:
Posts (Atom)
ಅವಳ್ಯಾರು?
ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...
-
ಚಂದಿರ ನಿನ್ನ ಹೊಗಳಿದ್ದ ಕಾರಣ ಮುನಿಸು ಬೆಳದಿಂಗಳಿಗೆ.. ರವಿಯೂ ನೋಡಿದಕ್ಕೆ ನಿನ್ನ ಕೋಪ ಸೂರ್ಯಕಾಂತಿಗೆ ... ಕಾರ್ಮೋಡ ನಿನಗೆ ತಂಪು ತರಲು ಮಿಂಚ...
-
ಖಾಲಿ ಹಾಳೆಯ ಕೇಳಲು ಮುನಿಸೇಕೆಂದು , ಕಣ್ಸನ್ನೆ ಮಾಡಿತು ಲೇಖನಿಯ ಕಡೆಗೆ .. ಲೇಖನಿಗೆ ಕೇಳಿದಾಗ ಬೆಟ್ಟು ಮಾಡಿತದು , ಶಾಯಿ ಮುಗಿದ ಬಾಟಲಿಯ ಎಡೆಗೆ.....
-
ಭಾವಗಳನ್ನು ಹಾಳೆಯಲಿ ಗೀಚಿ ನೆಮ್ಮದಿ ಕಾಣ ಹೊರಟೆ.. ಪದಗಳ ಕೊರತೆ ಕಾಡಿ ಅದೆಷ್ಟೋ ಹಾಳೆಗಳ ಸುರುಟಿ ಎಸೆದೆ ಕವಿಯಾಗುತ್ತೇನೆಂದು ಅಂದುಕೊಳ್ಳುವುದೇನೋ ಸುಲಭ ಬರೆದಿದ...