Tuesday 3 February 2015

....ನಂದಿದ ಜ್ಯೋತಿ....


............... ನಂದಿದ ಜ್ಯೋತಿ ............ 
ಅದೆಷ್ಟೋ ವರುಷಗಳು ಕಾದು 
ಬೆಳಕಾಗಲೆಂದು ಮನೆಗೆ
ಗಟ್ಟಿ ಮಾಡಿ  ಮಣ್ಣಿನ  ದೀಪವ 
ಬಿಳಿ ಬತ್ತಿ ಇಟ್ಟು 
ತಿಳಿ ಎಣ್ಣೆ ಸುರಿದು 
ಹಾರೈಕೆಯ ,ಆಸೆಯ ಕಡ್ಡಿ ಗೀರಿ 
ಜಾಗವೂ ಬೆಳಕಿನ ಆಸರೆ 
ಪಡೆಯಲೆಂದು ಕಳುಹಿಸಿದರು  
ಬೇರೊಂದೂರಿಗೆ ..
ತಾ ಉರಿದು ಬೆಳಕ ನೀಡುತ್ತಿತ್ತು 
ದೀಪ, ಪ್ರಜ್ವಲಿಸುತಿತ್ತು ಜ್ಯೋತಿ ,
ಎಲ್ಲಿಂದಲೋ ಬಂದ ಬಂಡ 
ಗಾಳಿಯ ಮುನ್ಸೂಚನೆ ಅದಕೆಲ್ಲಿತ್ತು ಪಾಪ!!!
ಗಾಳಿ ಬಿರುಗಾಳಿಯಾಗಿ, ಸುಂಟರ ಗಾಳಿಯಾಗಿ 
 ಬೀಸಿತೊಮ್ಮೆಲೆ .. ರಭಸಕ್ಕೆ  
ಬತ್ತಿಯೊಂದಿಗೆ ದೀಪದಲಿದ್ದ ಎಣ್ಣೆಯೂ 
ಚೆಲ್ಲಿ, ನುಚ್ಚು ನೂರಾಯಿತು ಬೆಳಕ ಹೊತ್ತ 
ಮಣ್ಣಿನ ಕುಡಿಕೆ .
ಬೆಳಕು ಕತ್ತಲೆಯ ಮರೆ ಸೇರಿ ಕೊನೆಗೆ  
ನಂದಿತಾ ದೇವಿಗೆ...
                                      -----ಶೀತಲ್
(("ಅತ್ಯಾಚಾರಕ್ಕೆ ಒಳಗಾದ "ನಿರ್ಭಯ"ಳಿಗೆ ಬರೆದ ಕವನ ..... ಆದರೇಕೂ ಈಗಿನ ಕಾಲ ಘಟ್ಟಕ್ಕೆ ,
ನಿಲ್ಲದ ಆ ಭಂಡತನಕ್ಕೆ ,ಎಲ್ಲಾ ಅತ್ಯಾಚಾರಕ್ಕೊಳಗಾದ ಆತ್ಮಗಳಿಗೂ ಈ ಕವನವೇ ಶ್ರದ್ಧಾಂಜಲಿ .... "))

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...