Thursday 19 July 2012

.......ಇಂದೇಕೋ....



ಬದುಕಿನ ಜಂಜಾಟದಲಿ ಸಿಲುಕಿ,
ಉಸಿರಾಡಲೂ ಪುರುಸೊತ್ತಿಲ್ಲದ ಇಕ್ಕಟ್ಟಿನಲ್ಲಿ,
ಇಂದೇಕೋ ಅನಿಸಿತು 
ಗೀಚಲು ಎರಡು ಸಾಲು... 
ಬಾರದೆ ಯಾವುದೇ ಕಲ್ಪನೆ ,
ಇರದೇ ಯಾವುದೇ ಭಾವನೆ,
ಮನಸ್ಸಿನ ಸಮಾಧಾನಕ್ಕೆ
ಏನೂ ಒಂದಿಷ್ಟು ಪದಗಳ ಜೋಡಿಸಿದೆ
ಆದರೆ,
ಪಾಪ!! ಬರೆದ ಪದಗಳೆಲ್ಲಾ 
ಸುಮ್ಮನೆ ಮಲಗಿವೆ 
ಇಂದೇಕೋ ಕವನವಾಗದೆ......

Sunday 8 July 2012

...ಏಕಾಂತ...







 ಅಂದಿದ್ದ ಜೋಡುಮರ
ಇಂದೇಕೋ ಒಂಟಿಯಾಗಿ
ಬಿರುಗಾಳಿಗೆ ಸಿಲುಕಿ
ನೆಲಕ್ಕುರಿಳಿದ ಸಂಗಾತಿಯ 
ದಿಟ್ಟಿಸುತ್ತಾ ತಲೆಬಾಗಿ ನಿಂತಿದೆ..
ಮಿಲನದ ಶತ್ರು ಬಿರುಗಾಳಿ
ಕರುಣೆಯೇ ಇಲ್ಲದಂತೆ 
ಉರುಳಿ ಬಿದ್ದ ಮರದ
ಕುರುಹೂ ಬಿಡಬಾರದೆಂದು ಬೀಸಲು,
ಪಾಪ! ನೋಡಲಾರದೆ ಆ ಒಂಟಿ ಮರ
ತನಗಾಗಿ ಕಣ್ನೀರಿಡಲು 
ಕಾರ್ಮೋಡಗಳ ಮೊರೆ ಇಟ್ಟಿದೆ...
ಅಳಲು ಜೋರಾಗಿ ಎಲ್ಲಾ ಮೋಡಗಳು
ದಾರುಳ ಆಕ್ರಂಧನ ಕಿವಿಗೆ ರಾಚಿದೆ...
ಸಮಸ್ತ ಮಳೆಹನಿಗಳು ಧರೆಗುರುಳಿ 
ಕೊನೆಗೂ ಬಿರುಗಾಳಿ
ಮೌನ ತಾಳಲು 
ಏಕಾಂಗಿಯಾದ ಮರಕ್ಕೆ
ನಿಶಬ್ಧದೊಂದಿಗೆ ಏಕಾಂತ
ಮಾತ್ರ ಜೊತೆಯಾಗಿದೆ....

Monday 2 July 2012

...ಭಯ..









ನೀ ನನ್ನವಳಾಗಲಾರೆ ಎಂದರಿತು
ಕಣ್ತುಂಬಿ ಮಬ್ಬಾಗಲು...
 ಆದರೆಲ್ಲಿ  ನೀ ಕಂಬನಿಯೊಂದಿಗೆ
ಕೆಳಗುರುಳುವೆಯೋ ಎಂದು
ಭಯವಾಗಿದೆ ಅಳಲು...

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...