Monday 26 December 2011

ದುರಂತ...

ಬೇಡವೆಂದರೂ ಆವರ್ತಿಸುತ್ತಿರುವ ಪರಿಸ್ಥಿತಿಗಳ ಜಡಿಮಳೆಗೆ,
ಎಷ್ಟೇ ಸಾಂತ್ವನದ ಹೊದಿಕೆ ಹೊದಿಸಿದರೂ,
ಮನಸಿಗೆ ಮಾತ್ರ ಭರವಸೆಯೇ ಇಲ್ಲ...
ಪ್ರತೀ ದಿನ ಮಳೆಯ ಚಳಿಗೆ ಬಳಲುತ್ತಲೇ,
ಮಂದಹಾಸದ ಮುಖವಾದ ಧರಿಸಿ,
ಬಿರುಕುಗಳ ಹಾರೈಕೆ ಮಾಡಲೆತ್ನಿಸುತಿದೆ ಪಾಪ!!!
ನಿರ್ಲಕ್ಷ್ಯ ಅಲೆಯಾಗಿ ಅಪ್ಪಳಿಸಿದರೂ,
ತನ್ನ ಹೊದಿಕೆಯನ್ನೇ ಬಿಗಿಯಾಗಿ ಹಿಡಿದು,
ನಗುವಿನ ಆಸರೆ ಬೇಡುತಿದೆ ..
ಆದರೂ ಎಲ್ಲಾ ಪ್ರಯತ್ನಗಳು ವಿಫಲವೇ..
ಯಾರಿಗೆ ಮೊರಇತ್ತರೂ ಉತ್ತರ ಮತ್ತದೇ ಹತಾಶೆ..
ಒಂದು ಪದದಲ್ಲಿ ಜೆವನವನ್ನು ಅರ್ಥೈಸುವುದಾದಲ್ಲಿ,
ಬದುಕಿನ ಸಾರಾಂಶಕ್ಕೆ ಉಳಿವ ಕೊನೇ ಪದ ದುರಂತ ಮಾತ್ರ..

No comments:

Post a Comment

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...