Monday 26 December 2011

ಮಿಂಚು_ಭೂಮಿ...

ನೀ ಬಂದು ಎಬ್ಬಿಸಿದಾಗಲೇ ಎಚ್ಚರ...
ನಿನ್ನ ಕಿರಣಗಳು ತಾಕಿದಾಗಲೇ ಕಣ್ರೆಪ್ಪೆಗಳ ಅಂತರ..
ಅಸ್ತವ್ಯಸ್ತವಾಗುವೆ ನಾ ಒಂದು ದಿನ ಬಾರದೆ ಇದ್ದರೆ ನೀ...
ಉಸಿರಾಟವೂ ನಿಂತೀ ಬಿಡುವುದು ಸೋಕದೆ ಹೋದರೆ ನೀ....
ನನ್ನಿಂದ ನೀ ದೂರವಾಗಲು ಅವಳೇ ಕಾರಣ .....
ಅವಳು ಬಂದ ದಿನವೇ ನನ್ನ ಮನಸಿನಾಸೆಗಳಿಗೆಲ್ಲ ಮರಣ...
ನೀ ಸೇರುವೆ ಅವಳ ಕೇಶದ ಮರೆಯಲ್ಲಿ...
ವಿಚಲಿತಳಾಗುವೆ ನಾನಾಗ ಇಲ್ಲಿ....
ಆ ಕಡುಗಪ್ಪು ಬಣ್ಣದಲ್ಲಿ ನೀ ಸೇರಿಬಿಡುವೆ..
ಆಗಸದ ಜೊತೆಗೆ ಆಗ ನಾನು ಅಳುವೆ..
ಅವಳಾದಳು ನಮ್ಮೀ ಅಂತರಕ್ಕೆ ಕಾರಣ...
ದೂರಾದಾಗಿನಿಂದ ಕೇವಲ ನಿನದೇ ಮನನ..
ಈ ಗೋಳು ಪಾಪ ಭೂಮಿಗೆ,
ಸೆಳೆದುಕೊಂದಾಗ ಕಾರ್ಮೋಡದ ಮಿಂಚುಬಳ್ಳಿಯು ಸೂರ್ಯನನ್ನು ತನ್ನೆಡೆಗೆ....

No comments:

Post a Comment

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...