Sunday 28 March 2021

...ತಾತ್ಸಾರ





ಸಾಕು ಎಂದಾಗ ನಿಲ್ಲಿಸಲು
ಇದು ನಿಮ್ಮ ತುಂಬಿದ ಹೊಟ್ಟೆಯಲ್ಲ...
ಬೇಕು ಎಂದಾಗ ಉಣಿಸಲು
ನಿಮಗಾಗಿ ಬಡಿಸಿಟ್ಟ ಕೂಳೂ ಅಲ್ಲ...
ನಾ ಬರೆದ ಕವನಗಳು,
ನನ್ನ ಮನಸ್ಸಿನ ಹಸಿವಿಗಾಗಿ ಹೊರತು,
ನಿಮ್ಮ ಉದರ ತುಂಬಿಸಲು ಅಲ್ಲ....
ಇಷ್ಟವಿರದೆ ಓದದಿರಿ,
ಕಷ್ಟವಾದರೆ ಕೇಳದಿರಿ....
ನನ್ನ ಪದಗಳಿಗೆ ನಿಮ್ಮ 
ಹಂಗು ಬೇಡ,
ನನ್ನ ಭಾವನೆಗಳಿಗೆ ನಿಮ್ಮ
ನಿರುತ್ಸಾಹವೂ ಬೇಡ....
ಭೂಮಿಗೆ ಭಾರವಾದರೆ
ಆಗಸಕೆ ಬಿಡುವೆ ಹಾರಿ,
ಕಟ್ಟುವೆ ಅಕ್ಷರಗಳಲ್ಲಿ
ನಿಮ್ಮ ತಾತ್ಸಾರಕ್ಕೆ ಗೋರಿ....

                                                           ---   ಶೀತಲ್ 

No comments:

Post a Comment

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...