Monday, 23 April 2018
Saturday, 21 April 2018
Friday, 4 August 2017
ನನ್ನ ಹೊಸ ಕನ್ನಡ ಟೆಕ್ ಚಾನಲ್ " ನಮ್ / ಟೆಕ್ ಸುದ್ದಿ ".
ನನ್ನ ಹೊಸ ಕನ್ನಡ ಟೆಕ್ ಚಾನಲ್ " ನಮ್ / ಟೆಕ್ ಸುದ್ದಿ ".
ಲೈಕ್ ,ಶೇರ್ ಸಬ್ಸ್ ಕ್ರೈ ಬ್ ಮಾಡಿ ಪ್ರೋತ್ಸಾಹಿಸಿ .......
NamTechSuddi
ಲೈಕ್ ,ಶೇರ್ ಸಬ್ಸ್ ಕ್ರೈ ಬ್ ಮಾಡಿ ಪ್ರೋತ್ಸಾಹಿಸಿ .......
NamTechSuddi
Sunday, 9 October 2016
"ಅವ "
"ಅವ "
ಮಳೆಬಿಲ್ಲನ್ನು ಲೇಖನಿ ಮಾಡಿ
ಪದಗಳಿಗೆ ರಂಗು ಚೆಲ್ಲುವ "ಅವ "
ಮುಂಜಾವಿನ ಕಿರಣವ ಸೂಜಿ ಮಾಡಿ
ಪ್ರೀತಿಯನ್ನು ಜೇಡರ ಬಲೆಯ ಇಬ್ಬನಿಯಂತೆ ಪೋಣಿಸುವ "ಅವ "
ಕಲ್ಪನೆಯ ಜೊತೆಗೂಡಿ
ಸಮಯದ ಮುಳ್ಳನ್ನು ತಿರುಗಿಸುವ "ಅವ "
ಸೂಕ್ಷ್ಮತೆಯ ಒಡನಾಡಿ
ಕುಶಲತೆಗೆ ಆತ್ಮೀಯ "ಅವ "
ಪ್ರತಿಭೆಯ ಅಚ್ಚುಮೆಚ್ಚಿನವ
ಸ್ಪೂರ್ತಿಗೂ ಪ್ರೇರಣೆ ಕೊಡುವ "ಅವ "
ಭಾವನೆಯ ದೋಣಿಯಲ್ಲಿ ಸಾಗುವ
ಅಪರಿಚಿತರಿಗೆ ಕ್ಷಣ ಮಾತ್ರದಲ್ಲಿ ಪರಿಚಿತನಾಗುವ "ಅವ "
ರತ್ನಗಳ ನಡುವಿದ್ದರೂ ವಜ್ರದಂತೆ ಹೊಳೆವ
ಸೃಜನಶೀಲತೆಯೂ ಸೋತು ಕೈಮುಗಿವ
ಕವನಗಳ ಸಾರಥಿ "ಅವ " ... ...
"ಅವ " ನೇ /ಳೆ /ರೇ ಕವಿ .. .... ....
(ಈ ಕವನ ಜಗದಲ್ಲಿರೋ ಎಲ್ಲಾ ಕವಿಗಳಿಗಾಗಿ ಮೀಸಲು.....
"ಅವ " ಎನ್ನುವುದು ಕವಿ ,
ಲಿಂಗ ಬೇಧವಿಲ್ಲದೆ ಭಾವನೆಗಳ ಹೊರಚಿಮ್ಮುವ ಆ ಪ್ರತಿಭೆಗಳಿಗೆಲ್ಲಾ ನನ್ನ ಈ ಸಣ್ಣ ಕವನವೊಂದು ನಿವೇದನೆ... )
.........ಶೀತಲ್ .....:)
Tuesday, 3 February 2015
....ನಂದಿದ ಜ್ಯೋತಿ....
............... ನಂದಿದ ಜ್ಯೋತಿ ............
ಅದೆಷ್ಟೋ ವರುಷಗಳು ಕಾದು
ಬೆಳಕಾಗಲೆಂದು ಮನೆಗೆ
ಗಟ್ಟಿ ಮಾಡಿ ಮಣ್ಣಿನ ದೀಪವ
ಬಿಳಿ ಬತ್ತಿ ಇಟ್ಟು
ತಿಳಿ ಎಣ್ಣೆ ಸುರಿದು
ಹಾರೈಕೆಯ ,ಆಸೆಯ ಕಡ್ಡಿ ಗೀರಿ
ಜಾಗವೂ ಬೆಳಕಿನ ಆಸರೆ
ಪಡೆಯಲೆಂದು ಕಳುಹಿಸಿದರು
ಬೇರೊಂದೂರಿಗೆ ..
ತಾ ಉರಿದು ಬೆಳಕ ನೀಡುತ್ತಿತ್ತು
ದೀಪ, ಪ್ರಜ್ವಲಿಸುತಿತ್ತು ಜ್ಯೋತಿ ,
ಎಲ್ಲಿಂದಲೋ ಬಂದ ಬಂಡ
ಗಾಳಿಯ ಮುನ್ಸೂಚನೆ ಅದಕೆಲ್ಲಿತ್ತು ಪಾಪ!!!
ಗಾಳಿ ಬಿರುಗಾಳಿಯಾಗಿ, ಸುಂಟರ ಗಾಳಿಯಾಗಿ
ಬೀಸಿತೊಮ್ಮೆಲೆ .. ರಭಸಕ್ಕೆ
ಬತ್ತಿಯೊಂದಿಗೆ ದೀಪದಲಿದ್ದ ಎಣ್ಣೆಯೂ
ಚೆಲ್ಲಿ, ನುಚ್ಚು ನೂರಾಯಿತು ಬೆಳಕ ಹೊತ್ತ
ಮಣ್ಣಿನ ಕುಡಿಕೆ .
ಬೆಳಕು ಕತ್ತಲೆಯ ಮರೆ ಸೇರಿ ಕೊನೆಗೆ
ನಂದಿತಾ ದೇವಿಗೆ...
-----ಶೀತಲ್
(("ಅತ್ಯಾಚಾರಕ್ಕೆ ಒಳಗಾದ "ನಿರ್ಭಯ"ಳಿಗೆ ಬರೆದ ಕವನ ..... ಆದರೇಕೂ ಈಗಿನ ಕಾಲ ಘಟ್ಟಕ್ಕೆ ,
ನಿಲ್ಲದ ಆ ಭಂಡತನಕ್ಕೆ ,ಎಲ್ಲಾ ಅತ್ಯಾಚಾರಕ್ಕೊಳಗಾದ ಆತ್ಮಗಳಿಗೂ ಈ ಕವನವೇ ಶ್ರದ್ಧಾಂಜಲಿ .... "))
-----ಶೀತಲ್
(("ಅತ್ಯಾಚಾರಕ್ಕೆ ಒಳಗಾದ "ನಿರ್ಭಯ"ಳಿಗೆ ಬರೆದ ಕವನ ..... ಆದರೇಕೂ ಈಗಿನ ಕಾಲ ಘಟ್ಟಕ್ಕೆ ,
ನಿಲ್ಲದ ಆ ಭಂಡತನಕ್ಕೆ ,ಎಲ್ಲಾ ಅತ್ಯಾಚಾರಕ್ಕೊಳಗಾದ ಆತ್ಮಗಳಿಗೂ ಈ ಕವನವೇ ಶ್ರದ್ಧಾಂಜಲಿ .... "))
Tuesday, 4 December 2012
Thursday, 27 September 2012
Subscribe to:
Posts (Atom)
ಅವಳ್ಯಾರು?
ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...
-
ಚಂದಿರ ನಿನ್ನ ಹೊಗಳಿದ್ದ ಕಾರಣ ಮುನಿಸು ಬೆಳದಿಂಗಳಿಗೆ.. ರವಿಯೂ ನೋಡಿದಕ್ಕೆ ನಿನ್ನ ಕೋಪ ಸೂರ್ಯಕಾಂತಿಗೆ ... ಕಾರ್ಮೋಡ ನಿನಗೆ ತಂಪು ತರಲು ಮಿಂಚ...
-
ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...
-
ಭಾವಗಳನ್ನು ಹಾಳೆಯಲಿ ಗೀಚಿ ನೆಮ್ಮದಿ ಕಾಣ ಹೊರಟೆ.. ಪದಗಳ ಕೊರತೆ ಕಾಡಿ ಅದೆಷ್ಟೋ ಹಾಳೆಗಳ ಸುರುಟಿ ಎಸೆದೆ ಕವಿಯಾಗುತ್ತೇನೆಂದು ಅಂದುಕೊಳ್ಳುವುದೇನೋ ಸುಲಭ ಬರೆದಿದ...




